A discourse by Siddeshwara Swamy - 4th May 2008
4ನೇ ಮೇ 2008, ಭಾನುವಾರ ಸಂಜೆ 5 ಗಂಟೆಗೆ ಎಸ್.ಷಡಕ್ಷರಿ ಅವರ ‘ಕ್ಷಣಹೊತ್ತು ಆಣಿಮುತ್ತು: ಭಾಗ-೨’ ಕೃತಿಯನ್ನು ಶ್ರೀ ಸಿದ್ಧೇಶ್ವರ ಸ್ವಾಮಿಗಳು ಬಿಡುಗಡೆ ಮಾಡುವ ಕಾರ್ಯಕ್ರಮವಿತ್ತು. ಅದಕ್ಕೂ ಮುನ್ನ, 4 ರಿಂದ 5 ರವರೆಗೆ ಸಿದ್ಧೇಶ್ವರ ಸ್ವಾಮಿಗಳ ಉಪನ್ಯಾಸ ಕಾರ್ಯಕ್ರಮವಿತ್ತು. ಇಲ್ಲಿ, ಆ ಉಪನ್ಯಾಸದ ಧ್ವನಿಮುದ್ರಣವನ್ನು ಅಂಟಿಸುತ್ತಿದ್ದೇನೆ.
ಶ್ರೀ ಶಂಕರ ಶ್ಯಾನುಭೋಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಸವಣ್ಣನವರ "ಉಳ್ಳವರು ಶಿವಾಲಯವ ಮಾಡುವರು" ವಚನವನ್ನು ಸುಶ್ರಾವ್ಯವಾಗಿ ಹಾಡಿದರು. ಇದರ ಧ್ವನಿಮುದ್ರಣವನ್ನು ನಿಮ್ಮ ಗಣಕಯಂತ್ರಕ್ಕೆ ಇಳಿಸಿಕೊಳ್ಳಲು, ಇಲ್ಲಿ ಕ್ಲಿಕ್ಕಿಸಿರಿ.
ಅಂತರ್ಜಾಲದಲ್ಲಿಯೇ ನೇರವಾಗಿ ಕೇಳಲು ಇಲ್ಲಿ ಕ್ಲಿಕ್ಕಿಸಿ:
ಪ್ರಾರಂಭದಲ್ಲಿ ಮೈಕಾಸುರನ ಮುನಿಸಿನಿಂದ ಉಪನ್ಯಾಸಕರ ಧ್ವನಿಯು ನಾನು ಕುಳಿತಲ್ಲಿಗೆ ತಲುಪುವ ಹೊತ್ತಿಗೆ ಕ್ಷೀಣವಾಗುತ್ತಿತ್ತು. ಆದುದರಿಂದ, ಮೊದಲ ಕೆಲವು ನಿಮಿಷಗಳು ಮುದ್ರಣಗೊಂಡಿಲ್ಲ. ಈ ಮೊದಲ ಕೆಲವು ನಿಮಿಷಗಳ ಸಾರಾಂಶವನ್ನು ನನ್ನ ತಿಳುವಳಿಕೆಗನುಸಾರವಾಗಿ ತಿಳಿಸುತ್ತೇನೆ:
"ಬಸವಣ್ಣನವರ ಕಾಲದಲ್ಲಿ ‘ಹಡಪದ ಅಪ್ಪಣ್ಣ’ - ಎಂಬ ಒಬ್ಬ ಸಾಮಾನ್ಯ ಕ್ಷೌರಿಕನೊಬ್ಬನಿದ್ದ. ಅವನು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದಿದ್ದರೂ, ಅವನ ವಚನಗಳನ್ನು ಓದಿದರೆ ಅವನ ಪ್ರಬುದ್ಧತೆಯ ಅರಿವಾಗುತ್ತದೆ", ಎಂದು ಹೇಳಿ ಸಿದ್ಧೇಶ್ವರ ಸ್ವಾಮಿ, ಹಡಪದ ಅಪ್ಪಣ್ಣನ ಒಂದು ವಚನವನ್ನು ಉದಾಹರಿಸಿದರು. ಮುಂದುವರಿದು, ಈ ದೇಹಕ್ಕೆ ಅದರದೇ ಆದ ಇತಿ-ಮಿತಿ ಇದೆ. ಆದರೆ, ಮನಸ್ಸಿಗೆ ಈ ಮಿತಿಗಳು ಅನ್ವಯವಾಗುವುದಿಲ್ಲ. ಮನಸ್ಸು ಎಷ್ಟು ಎತ್ತರಕ್ಕೆ ಹೋಗಬಹುದು ಎನ್ನುವುದಕ್ಕೆ, ಸಾಮಾನ್ಯ ಮನುಷ್ಯನಾಗಿ, ವಿಶೇಷ ತರಬೇತಿಯನ್ನು ಹೊಂದದೆಯೂ, ಉತ್ತಮವಾದಂತಹ ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣ ಮತ್ತು ಅವನ ಹೆಂಡತಿ ಲಿಂಗಮ್ಮ ಇವರೇ ಸಾಕ್ಷಿ - ಎಂದು ಹೇಳಿದರು. ಇಲ್ಲಿಂದ ಮುಂದೆ ನೀವೇ ಧ್ವನಿಮುದ್ರಣವನ್ನು ಕೇಳಿ ಆನಂದಿಸಿ.
ಶ್ರೀ ಶಂಕರ ಶ್ಯಾನುಭೋಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಸವಣ್ಣನವರ "ಉಳ್ಳವರು ಶಿವಾಲಯವ ಮಾಡುವರು" ವಚನವನ್ನು ಸುಶ್ರಾವ್ಯವಾಗಿ ಹಾಡಿದರು. ಇದರ ಧ್ವನಿಮುದ್ರಣವನ್ನು ನಿಮ್ಮ ಗಣಕಯಂತ್ರಕ್ಕೆ ಇಳಿಸಿಕೊಳ್ಳಲು, ಇಲ್ಲಿ ಕ್ಲಿಕ್ಕಿಸಿರಿ.
ಅಂತರ್ಜಾಲದಲ್ಲಿಯೇ ನೇರವಾಗಿ ಕೇಳಲು ಇಲ್ಲಿ ಕ್ಲಿಕ್ಕಿಸಿ:
ಪ್ರಾರಂಭದಲ್ಲಿ ಮೈಕಾಸುರನ ಮುನಿಸಿನಿಂದ ಉಪನ್ಯಾಸಕರ ಧ್ವನಿಯು ನಾನು ಕುಳಿತಲ್ಲಿಗೆ ತಲುಪುವ ಹೊತ್ತಿಗೆ ಕ್ಷೀಣವಾಗುತ್ತಿತ್ತು. ಆದುದರಿಂದ, ಮೊದಲ ಕೆಲವು ನಿಮಿಷಗಳು ಮುದ್ರಣಗೊಂಡಿಲ್ಲ. ಈ ಮೊದಲ ಕೆಲವು ನಿಮಿಷಗಳ ಸಾರಾಂಶವನ್ನು ನನ್ನ ತಿಳುವಳಿಕೆಗನುಸಾರವಾಗಿ ತಿಳಿಸುತ್ತೇನೆ:
"ಬಸವಣ್ಣನವರ ಕಾಲದಲ್ಲಿ ‘ಹಡಪದ ಅಪ್ಪಣ್ಣ’ - ಎಂಬ ಒಬ್ಬ ಸಾಮಾನ್ಯ ಕ್ಷೌರಿಕನೊಬ್ಬನಿದ್ದ. ಅವನು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡದಿದ್ದರೂ, ಅವನ ವಚನಗಳನ್ನು ಓದಿದರೆ ಅವನ ಪ್ರಬುದ್ಧತೆಯ ಅರಿವಾಗುತ್ತದೆ", ಎಂದು ಹೇಳಿ ಸಿದ್ಧೇಶ್ವರ ಸ್ವಾಮಿ, ಹಡಪದ ಅಪ್ಪಣ್ಣನ ಒಂದು ವಚನವನ್ನು ಉದಾಹರಿಸಿದರು. ಮುಂದುವರಿದು, ಈ ದೇಹಕ್ಕೆ ಅದರದೇ ಆದ ಇತಿ-ಮಿತಿ ಇದೆ. ಆದರೆ, ಮನಸ್ಸಿಗೆ ಈ ಮಿತಿಗಳು ಅನ್ವಯವಾಗುವುದಿಲ್ಲ. ಮನಸ್ಸು ಎಷ್ಟು ಎತ್ತರಕ್ಕೆ ಹೋಗಬಹುದು ಎನ್ನುವುದಕ್ಕೆ, ಸಾಮಾನ್ಯ ಮನುಷ್ಯನಾಗಿ, ವಿಶೇಷ ತರಬೇತಿಯನ್ನು ಹೊಂದದೆಯೂ, ಉತ್ತಮವಾದಂತಹ ವಚನಗಳನ್ನು ರಚಿಸಿದ ಹಡಪದ ಅಪ್ಪಣ್ಣ ಮತ್ತು ಅವನ ಹೆಂಡತಿ ಲಿಂಗಮ್ಮ ಇವರೇ ಸಾಕ್ಷಿ - ಎಂದು ಹೇಳಿದರು. ಇಲ್ಲಿಂದ ಮುಂದೆ ನೀವೇ ಧ್ವನಿಮುದ್ರಣವನ್ನು ಕೇಳಿ ಆನಂದಿಸಿ.
Comments
Post a Comment
Please leave a comment if you like the post.